ಶ್ರೀಮಂಗಲ, ಜು. 19: ಮೈಸೂರು ಶ್ರೀ ಕಾವೇರಿ ಕೊಡವ ಅಸೋಸಿಯೇಷನ್ ಮತ್ತು ಕೊಡಗು ಮಾಡೆಲ್ ಸ್ಕೂಲ್ ಆಡಳಿತ ಮಂಡಳಿ ವತಿಯಿಂದ ರಾಜ್ಯ ಸರ್ಕಾರದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ನೂತನ ಸಚಿವರಾಗಿರುವ ತನ್ವೀರ್ ಸೇಠ್ ಅವರನ್ನು ಮೈಸೂರಿನ ಅವರ ನಿವಾಸದಲ್ಲಿ ಕೊಡಗಿನ ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಲಾಯಿತು. ಈ ಸಂದರ್ಭ ಕುಂಡ್ರಂಡ ಭಾಗೀರಥಿ ತಿಮ್ಮಯ್ಯ, ಮೊಳ್ಳೇರ ಕವಿತಾ, ಕಾವೇರಿ ಕೊಡವ ಅಸೋಸಿಯೇಷನ್‍ನ ಅಧ್ಯಕ್ಷ ಪುದಿಯೊಕ್ಕಡ ಮಾದಪ್ಪ, ಕಾರ್ಯದರ್ಶಿ ಅಪ್ಪಚ್ಚಂಗಡ ಮೋಟಯ್ಯ, ನಿರ್ದೇಶಕ ಕಂಜಿ ತಂಡ ಅಯ್ಯಪ್ಪ, ನಿವೃತ್ತ ಪ್ರಾಂಶುಪಾಲೆ ಚೌರೀರ ಸೀತಮ್ಮ, ಕೆ. ವಾಸು, ಲಲಿತ, ಪದ್ಮಾ ಬೋಪಯ್ಯ, ನಂಬುಡುಮಾಡ ಗಣಪತಿ, ಖಜಾಂಚಿ ಕೊಪ್ಪೀರ ಪೊನ್ನಪ್ಪ, ಚೊಕೀರ ಸೋಮಯ್ಯ, ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಅಣ್ಣಯ್ಯ ಹಾಜರಿದ್ದರು.