ಮಡಿಕೇರಿ, ಜೂ. 11: ವಿಧಾನಪರಿಷತ್‍ಗೆ ಕಾಂಗ್ರೆಸ್ ಪಕ್ಷದಿಂದ ವೀಣಾ ಅಚ್ಚಯ್ಯ ಅವರು ಆಯ್ಕೆ ಆಗಿರುವದರಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ ಎಂದು ಮಾಜೀ ಸಂಸದ ಹೆಚ್. ವಿಶ್ವನಾಥ್ ಅಭಿಪ್ರಾಯಪಟ್ಟಿದ್ದಾರೆ.

ಕೊಡಗಿನಲ್ಲಿ ವಿಧಾನಪರಿಷತ್, ವಿಧಾನಸಭೆ ಹಾಗೂ ಸಂಸತ್‍ನಲ್ಲಿ ಪ್ರತಿನಿಧಿಸಲು ಕಾಂಗ್ರೆಸ್‍ಗೆ ಅವಕಾಶವಿಲ್ಲದಿದ್ದಾಗ, ಪಕ್ಷದ ವರಿಷ್ಠರು ವೀಣಾ ಅವರನ್ನು ಆಯ್ಕೆ ಮಾಡಿರುವದು ಸಂದರ್ಭೋಚಿತವಾಗಿದೆ; ಅದೇ ರೀತಿ ಮೈಸೂರಿನಲ್ಲಿ ಕೂಡಾ ರಿಜ್ವಾನ್ ಅವರನ್ನು ಆಯ್ಕೆ ಮಾಡಿರುವದರಿಂದ ಕಾಂಗ್ರೆಸ್ ಪಕ್ಷಕ್ಕೆ ಮೈಸೂರು ಲೋಕಸಭಾ ಕ್ಷೇತ್ರದಲ್ಲೇ ಹೆಚ್ಚಿನ ಬಲ ಬಂದಿದೆ ಎಂದು ಹೇಳಿಕೆ ನೀಡಿದ್ದಾರೆ.