ಸೋಮವಾರಪೇಟೆ, ಜೂ. 8: ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆಯಡಿ ವಾರ್ಷಿಕ ರೂ. 330 ವಿಮಾ ಕಂತು ಭರಿಸಿದ್ದ ಯುವಕನ ಕುಟುಂಬಕ್ಕೆ ರೂ. 2 ಲಕ್ಷ ವಿಮೆ ಪರಿಹಾರ ಧನವನ್ನು ಹಸ್ತಾಂತರಿಸಲಾಯಿತು.

ಸಮೀಪದ ಬಜೆಗುಂಡಿ ಗ್ರಾಮದ 21 ವರ್ಷದ ಯುವಕ ತೀರ್ಥ ಎಂಬವರು ಇಲ್ಲಿನ ವಿಜಯ ಬ್ಯಾಂಕ್ ಮೂಲಕ ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭಿಮಾ ಯೋಜನೆಯಲ್ಲಿ ವಾರ್ಷಿಕ ರೂ. 300 ಪಾವತಿಸಿದ್ದರು. ಈ ಮಧ್ಯೆ ಕಳೆದ ತಾ. 9.3.2016 ರಂದು ಅನಾರೋಗ್ಯದಿಂದ ತೀರ್ಥ ಅವರು ಸಾವನ್ನಪ್ಪಿದರು. ಕೇಂದ್ರ ಸರ್ಕಾರದ ನೂತನ ಯೋಜನೆಯಡಿ ವಿಮೆ ಮಾಡಿಸಿದ್ದರಿಂದ ತೀರ್ಥ ಅವರ ಪೋಷಕರಾದ ಪದ್ಮಮ್ಮ ಅವರಿಗೆ ರೂ. 2 ಲಕ್ಷ ವಿಮಾ ಮೊತ್ತವನ್ನು ಇಲ್ಲಿನ ವಿಜಯ ಬ್ಯಾಂಕ್‍ನ ವ್ಯವಸ್ಥಾಪಕ ಚಂದ್ರಶೇಖರ್ ಮತ್ತು ಮಯಾಂಕ್ ಶಿಲಾವತ್ ಅವರುಗಳು ವಿತರಿಸಿದರು.