ಸೋಮವಾರಪೇಟೆ, ಜೂ. 8: ಹಾಸನದಿಂದ ಸೋಮವಾರಪೇಟೆ ಮಾರ್ಗದ ಮೂಲಕ ಮಡಿಕೇರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ವೊಂದು ಹಾಲೇರಿ ಸಮೀಪದ ತಿರುವಿನಲ್ಲಿ ರಸ್ತೆಯ ಬದಿಯಿದ್ದ ಗುಂಡಿಗೆ ಇಳಿದಿದ್ದು, ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ.
ಸೋಮವಾರಪೇಟೆಯಿಂದ ಮಡಿಕೇರಿಗೆ ನಿನ್ನೆ ಸಂಜೆ ತೆರಳುತ್ತಿದ್ದ ಬಸ್, ಎದುರು ಭಾಗದಿಂದ ಬರುತ್ತಿದ್ದ ವಾಹನಕ್ಕೆ ಸ್ಥಳಾವಕಾಶ ಕಲ್ಪಿಸುವ ಸಂದರ್ಭ ಗುಂಡಿಗೆ ಇಳಿದಿದೆ. ನಂತರ ಬಸ್ನಲ್ಲಿದ್ದ ಪ್ರಯಾಣಿಕರನ್ನು ಬೇರೆ ಬಸ್ಗೆ ಕಳುಹಿಸಲಾಗಿದೆ. ರಸ್ತೆಯ ಒಂದು ಬದಿ ಕಂದಕವಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಇಂದು ಸಂಜೆಯವರೆಗೂ ಬಸ್ ತೆರವುಗೊಳಿಸಲು ಸಂಬಂಧಿಸಿದವರು ಮುಂದಾಗಿರಲಿಲ್ಲ.