ಶನಿವಾರಸಂತೆ, ಜೂ. 18: ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಕೆಲಕೊಡ್ಲಿ ಗ್ರಾಮದಲ್ಲಿ ಮರಳು ಲಾರಿ ಮಾಲೀಕರ ಹತ್ತಿರ ಹಣಕ್ಕಾಗಿ ಒತ್ತಡ ಹೇರಿ ಮರಳಿ ಕೊಡುತ್ತೇನೆ ಎಂದು ತಾಕೀತು ಮಾಡಿದ ಇಂಜಿನಿಯರ್ ಹಾಗೂ ಗುತ್ತಿಗೆದಾರರುಗಳ ವಿರುದ್ಧ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲಕೊಡ್ಲಿ ಸ್ಟಾಕ್ಯಾರ್ಡ್ನಲ್ಲಿ 2015-16ನೇ ಸಾಲಿನ ಮರಳು 40,94,921 ರೂ.ಗಳಿಗೆ ಟೆಂಡರ್ ಆಗಿದ್ದು, ಮರಳು ಲಾರಿ ಮಾಲೀಕರ ಹತ್ತಿರ ಮಡಿಕೇರಿ ಲೋಕೋಪಯೋಗಿ ಇಂಜಿನಿಯರ್ ಹಾಗೂ ಲೋಕೋಪಯೋಗಿ ಕ್ಲಾಸ್ -1 ಗುತ್ತಿಗೆದಾರ ಹಾರಂಗಿ ಡ್ಯಾಮ್ನ ದೊರೆಸ್ವಾಮಿ ಅವರುಗಳ ಮೇಲೆ ಕಟ್ಟೆಪುರ ಗ್ರಾಮದ ಎಂ.ಎನ್. ಸಂತೋಷ್ ಅವರು ನೀಡಿದ ದೂರಿನ ಮೇರೆ ಶನಿವಾರಸಂತೆ ಸಹಾಯಕ ಸಬ್ಇನ್ಸ್ಪೆಕ್ಟರ್ ಹೆಚ್.ಎಂ. ಗೋವಿಂದ್ ಅವರು ಪ್ರಕರಣ ದಾಖಲಿಸಿದ್ದಾರೆ.