ಮಡಿಕೇರಿ, ಜು. 22: ಮಡಿಕೇರಿ ಮತ್ತು ಕುಶಾಲನಗರ ಲಯನ್ಸ್ ಮತ್ತು ಲಯನೆಸ್ಸ್ ಕ್ಲಬ್‍ನ ಜಂಟಿ ಪದಗ್ರಹಣ ಸಮಾರಂಭವನ್ನು ಮಡಿಕೇರಿ ಸಮೀಪದ ಕಾಟಕೇರಿಯ ವಿಸ್ತಾ ರೆಸಾರ್ಟ್‍ನಲ್ಲಿ ಹಮ್ಮಿಕೊಳ್ಳಲಾಗಿತ್ತು.ಮಡಿಕೇರಿ ಲಯನ್ಸ್ ಸಂಸ್ಥೆಯ 2016-17ನೇ ಸಾಲಿನ ಅಧ್ಯಕ್ಷರಾಗಿ ಅಗಸ್ಟಿನ್ ಜಯರಾಜ್, ಕಾರ್ಯದರ್ಶಿಯಾಗಿ ಫಾದರ್ ಇಗ್ನೀಷಿಯಸ್ ಮಸ್ಕರೆನಸ್ ಹಾಗೂ ಖಜಾಂಚಿಯಾಗಿ ಎನ್.ಬಿ. ರವಿ ಆಯ್ಕೆಗೊಂಡರು. ಮಡಿಕೇರಿ ಲಯನೆಸ್ ಸಂಸ್ಥೆಯ ಅಧ್ಯಕ್ಷರಾಗಿ ಕವಿತ ಬೊಳ್ಳಪ್ಪ ಹಾಗೂ ಕಾರ್ಯದರ್ಶಿಯಾಗಿ ಜಯಂತಿ ಸಂಜಯ್ ಮತ್ತು ಖಜಾಂಚಿಯಾಗಿ ಪ್ರತಿಮಾ ರವಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಕುಶಾಲನಗರದ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಎಂ.ವಿ. ಶಶಿಕುಮಾರ್, ಕಾರ್ಯದರ್ಶಿಯಾಗಿ ಡಾ. ಪ್ರವೀಣ್ ದೇವರಗುಂಡ, ಖಜಾಂಚಿಯಾಗಿ ಹೆಚ್.ಎಂ. ಗಣೇಶ್ ಆಯ್ಕೆಯಾದರು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಎಂ.ಜೆ.ಎಫ್. ಕಿಶೋರ್ ರಾವ್ ನೂತನ ಆಡಳಿತ ಮಂಡಳಿಗೆ ಪ್ರಮಾಣವಚನ ಭೋದಿಸಿದರು. ವೇದಿಕೆಯಲ್ಲಿ ಲಯನ್ಸ್‍ನ ಪ್ರಾಂತೀಯ ಅಧ್ಯಕ್ಷ ಲೀಲಾರಾಮ್, ವಲಯ ಅಧ್ಯಕ್ಷ ಅಪ್ಪಣ್ಣ ಹಾಗೂ ರಕ್ಷಿತ್ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಪಿ.ಪಿ. ಸೋಮಣ್ಣ ವಹಿಸಿದ್ದರು. ಕಾರ್ಯದರ್ಶಿ ಡಿ.ಜಿ. ಕಿಶೋರ್, ಹಿಂದಿನ ಸಾಲಿನ ವರದಿ ವಾಚಿಸಿದರು. ನೂತನ ಕಾರ್ಯದರ್ಶಿ ಫಾದರ್ ಇಗ್ನೀಷಿಯಸ್ ಮಸ್ಕರೆನಸ್ ವಂದಿಸಿದರು. ಲಯನ್ಸ್ ಸಾರ್ವಜನಿಕ ಸಂಪರ್ಕ ಅಧಿಕಾರಿ ನವೀನ್ ಅಂಬೆಕಲ್ ಕಾರ್ಯಕ್ರಮದ ಮಾಹಿತಿ ನೀಡಿದರು.