ಶ್ರೀಮಂಗಲ, ಅ. 28: ಕೊಡವ ಸಮಾಜ ಒಕ್ಕೂಟದ ವತಿಯಿಂದ ಪ್ರತಿವರ್ಷ ನಡೆಯುವ ‘ಕೊಡವ ನಮ್ಮೆ’ ಈ ಬಾರಿ ನವೆಂಬರ್ 3ರಿಂದ 6ರ ವರೆಗೆ ನಡೆಯಲಿದ್ದು, ತಾ.6 ರಂದು ಅಂತರ ಕೊಡವ ಸಮಾಜಗಳ ನಡುವೆ ನಡೆಯುವ ಸಾಂಸ್ಕøತಿಕ ಪೈಪೋಟಿ ಕಾರ್ಯಕ್ರಮವು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಾಯೋಜಕತ್ವದಲ್ಲಿ ನಡೆಯಲಿದೆ ಎಂದು ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ತಿಳಿಸಿದರು.

ಕೊಡವ ಸಮಾಜ ಒಕ್ಕೂಟ ಮನವಿ ಮೇರೆಗೆ, ಕೊಡವ ಸಮಾಜ ಒಕ್ಕೂಟದ ಆಶ್ರಯದಲ್ಲಿ ಈ ಬಾರಿ ನಡೆಯುವ ಕೊಡವ ನಮ್ಮೆಯ ಸಾಂಸ್ಕøತಿಕ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಕಾಡೆಮಿ ವಹಿಸಿಕೊಂಡಿದೆ ಎಂದು ಅವರು ತಿಳಿಸಿದರು.

ತಾ.6ರಂದು ಸಾಂಸ್ಕøತಿಕ ಕಾರ್ಯಕ್ರಮ ಬೆಳಿಗ್ಗೆ 9 ಗಂಟೆಗೆ ಆರಂಭವಾಗಲಿದೆ. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವೆ ಉಮಾಶ್ರಿ, ಕೊಡವ ಸಮಾಜ ಒಕ್ಕೂಟದ ಪೋಷಕ ಸದಸ್ಯರಾಗಿರುವ ಮಾಜಿ ಸಚಿವ ಮೇರಿಯಂಡ ಸಿ. ನಾಣಯ್ಯ ಅವರು ಭಾಗವಹಿಸಲಿದ್ದಾರೆ. ಕೋಲಾಟ್, ಬೊಳಕಾಟ್, ಕತ್ತಿಯಾಟ್, ಉಮ್ಮತ್ತಾಟ್, ಬಾಳೋಪಾಟ್, ಪರೆಯಕಳಿ, ಸಮ್ಮಂದ ಅಡ್‍ಕುವೊ, ತಾಳಿಪಾಟ್, ಕಪ್ಪೆಯಾಟ್ ಸೇರಿ ಒಟ್ಟು 9 ಕೊಡವ ಸಾಂಸ್ಕøತಿಕ ಪೈಪೋಟಿ ಅಂತರ ಕೊಡವ ಸಮಾಜದ ನಡುವೆ ನಡೆಯಲಿದೆ. ಇದಲ್ಲದೆ ಹಾಕಿ ಪಂದ್ಯಾವಳಿಯ ಫೈನಲ್ ಪಂದÀ್ಯದಂದು ಉರುಟ್ಟಿಕೊಟ್ಟ್ ಆಟ್ ಹಾಗೂ ಕತ್ತಿಯಾಟ್ ನಡೆಯಲಿದೆ ಎಂದು ತಮ್ಮಯ್ಯ ತಿಳಿಸಿದರು.

ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಮಾತನಾಡಿ, ಕಳೆದ ಹಲವು ವರ್ಷದಿಂದ ಕೊಡವ ಸಾಂಸ್ಕøತಿಕ ಕಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಬಾಳುಗೋಡು ಒಕ್ಕೂಟದಲ್ಲಿ ಕೊಡವ ನಮ್ಮೆ ಆಚರಣೆ ಮಾಡಲಾಗುತ್ತಿದೆ. ಇದೇ ಸಂಧರ್ಭ ಹಾಕಿಯಾಟಕ್ಕೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಂತರ ಕೊಡವ ಸಮಾಜದ ನಡುವೆ ಪಂದ್ಯಾವಳಿ ನಡೆಸುತ್ತಾ ಬರಲಾಗುತ್ತಿದೆ. ಸಾಂಸ್ಕøತಿಕ ಪೈಪೋಟಿಗೆ ಇದೇ ಮೊದಲ ಬಾರಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಾಯೋಜಕತ್ವವನ್ನು ಪಡೆಯಲಾಗಿದೆ. ಈಗಾಗಲೆ ಕಾರ್ಯಕ್ರಮ ಯಶಿಸ್ವಿಗೆ ಸಿದ್ಧತೆ ನಡೆಸಲಾಗುತ್ತಿದೆ, ಸಾಂಸ್ಕøತಿಕ ಕಾರ್ಯಕ್ರಮ ಉಸ್ತುವಾರಿಯನ್ನು ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹಾಗೂ ಪೊನ್ನಂಪೇಟೆ ಕೊಡವ ಸಮಾಜದ ಸಾಂಸ್ಕøತಿಕ ಕಾರ್ಯದರ್ಶಿ ಕಾಳಿಮಾಡ ಮೋಟಯ್ಯ ಅವರನ್ನು ಸಂಚಾಲಕರಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

ಪೂರ್ವಭಾವಿ ಸಭೆಯಲ್ಲಿ ಕೊಡವ ಸಮಾಜ ಒಕ್ಕೂಟದ ಉಪಾಧ್ಯಕ್ಷ ಹಾಗೂ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷರೂ ಆಗಿರುವ ಮಂಡೇಡ ರವಿ ಉತ್ತಪ್ಪ, ಕಾರ್ಯದರ್ಶಿ ವಾಟೇರಿರ ಶಂಕರು ಪೂವಯ್ಯ, ಖಜಾಂಚಿ ಚಿರಿಯಪಂಡ ಕಾಶಿಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ಕಾರ್ಯಕ್ರಮದ ಸಂಚಾಲಕರುಗಳಾಗಿರುವ ಮುಲ್ಲೆಂಗಡ ಬೇಬಿ ಚೋಂದಮ್ಮ, ಅಣ್ಣೀರ ಹರೀಶ್ ಮಾದಪ್ಪ ಭಾಗವಹಿಸಿದ್ದರು.