ಮಡಿಕೇರಿ, ಜೂ. 12: ಕೊಡಗು ಪ್ರೆಸ್‍ಕ್ಲಬ್‍ನ ವಾರ್ಷಿಕ ಮಹಾಸಭೆ ಇಂದು ಪತ್ರಿಕಾಭವನ ಸಭಾಂಗಣದಲ್ಲಿ ನಡೆಯಿತು.

ಸಭೆಯ ಅಧ್ಯಕ್ಷತೆಯನ್ನು ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಜಗದೀಶ್ ಬೆಳ್ಯಪ್ಪ ವಹಿಸಿದ್ದರು. ಈ ಸಂದರ್ಭ ಪ್ರೆಸ್‍ಕ್ಲಬ್‍ನ ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್, ಉಪಾಧ್ಯಕ್ಷ ಕಾಯಪಂಡ ಶಶಿ ಸೋಮಯ್ಯ, ಹಿರಿಯ ಉಪಾಧ್ಯಕ್ಷ ಕೇಶವ ಕಾಮತ್, ಕ್ಲಬ್‍ನ ಸದಸ್ಯರು ಹಾಜರಿದ್ದರು. ಜಗದೀಶ್ ಬೆಳ್ಯಪ್ಪ ಅವರು ಅನಿವಾರ್ಯ ಕಾರಣದಿಂದ ತಮ್ಮ ಅಧ್ಯಕ್ಷ ಸ್ಥಾನ ಬಿಟ್ಟುದರಿಂದ ಕೇಶವ ಕಾಮತ್ ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.