ವೀರಾಜಪೇಟೆ, ಜೂ. 14: ರಾಜ್ಯದ ವಿಧಾನ ಪರಿಷತ್, ರಾಜ್ಯ ಸಭೆಗೆ ವಿಧಾನಸಭೆಯಿಂದ ನಡೆದ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದ ಎಂಟು ಮಂದಿ ಶಾಸಕರು ಅಡ್ಡ ಮತದಾನ ಮಾಡಿರು ವದು ಪಕ್ಷಕ್ಕೆ ಮಾಡಿದ ದ್ರೋಹ, ಇದನ್ನು ಪಕ್ಷದ ಹಿತೈಷಿಗಳು, ಕಾರ್ಯಕರ್ತರು ತೀವ್ರವಾಗಿ ಖಂಡಿಸುವದಾಗಿ ಪಕ್ಷದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ತಿಳಿಸಿದರು.

ವೀರಾಜಪೇಟೆ ಪ್ರೆಸ್‍ಕ್ಲಬ್‍ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಕೇತ್ ಪೂವಯ್ಯ ಅವರು ಅಡ್ಡ ಮತದಾನ ಮಾಡಿರುವ ಎಂಟು ಶಾಸಕರ ಕ್ಷೇತ್ರಗಳಲ್ಲಿ ದೇವೇಗೌಡ ಹಾಗೂ ಕುಮಾರಸ್ವಾಮಿ ಇವರುಗಳು ಸ್ವತ: ಶ್ರಮಿಸಿ ಎಂಟು ಮಂದಿಯನ್ನು ವಿಧಾನ ಸಭೆಗೆ ಆಯ್ಕೆ ಮಾಡಿದ್ದರು. ಪಕ್ಷದ ವಿರುದ್ಧ ಮತ ಚಲಾಯಿಸಿ ಸ್ವಾರ್ಥ ಸಾಧಿಸಿ ಪಕ್ಷದ ಸಂವಿಧಾನದ ನಿಂiÀiಮಾವಳಿಗಳಿಗೆ ಅಪಚಾರ ಮಾಡಿದ್ದಾರೆ. ಈ ಎಂಟು ಮಂದಿ ಶಾಸಕರು ಪ್ರತಿಸ್ಪರ್ಧಿ ಅಭ್ಯರ್ಥಿಯ ಆಮಿಷಕ್ಕೊಳಗಾಗಿರುವದು ಸಾಬೀತಾಗಿದೆ. ದೇವೇಗೌಡರು, ಪ್ರಧಾನಿಯಾಗಿ, ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ಜನ ಜನಿತರಾದವರು. ರಾಜ್ಯದ ಜನತೆ ದೇವೇಗೌಡರ ಜಾತ್ಯತೀತ ಸಿದ್ಧಾಂತದ ಮೇಲೆ ಅಪಾರ ವಿಶ್ವಾಸ, ನಂಬಿಕೆ ಇಟ್ಟವರು. ಅವರು ಕೇಂದ್ರ ಹಾಗೂ ರಾಜ್ಯ ಸರಕಾರದ ನಾಯಕತ್ವ ದಲ್ಲಿ ಅಧಿಕಾರ ವಿಕೇಂದ್ರಿಕರಣ, ನಿಜವಾದ ರೈತರಿಗೆ ಮೂಲ ಸೌಲಭ್ಯಗಳು, ಜೊತೆಗೆ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡಿದ ಹರಿಕಾರ ಎಂದರು.

ಪಕ್ಷದ ಜಿಲ್ಲಾ ನಾಯಕ ಸಿ.ಎ. ನಾಸಿರ್ ಮಾತನಾಡಿ, ಪಕ್ಷದ ಎಂಟು ಶಾಸಕರ ಅಡ್ಡ ಮತದಾನ ಪಕ್ಷದ ವಿರುದ್ಧ ಅಕ್ಷಮ್ಯ ಅಪರಾಧ. ನಿನ್ನೆ ದಿನ ಬೆಂಗಳೂರಿನಲ್ಲಿ ಶಾಸಕರ ಪ್ರತಿಕೃತಿಗೆ ಕಾರ್ಯಕರ್ತರು, ಹಿತೈಷಿಗಳು ಚಪ್ಪಲಿ ಹಾರ ಹಾಕಿ ಪ್ರತಿಭಟಿಸಿದ್ದಾರೆ. ಇವರುಗಳ ಗೆಲುವಿಗೆ ಕಾರಣರಾದ ಮತದಾರರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಇವರನ್ನು ಕ್ಷಮಿಸುವದಿಲ್ಲ ಎಂದು ಹೇಳಿದರು.

ವೀರಾಜಪೇಟೆ ಪ.ಪಂ.ಯ ಹಿರಿಯ ಸದಸ್ಯ ಎಸ್.ಹೆಚ್. ಮತೀನ್ ಮಾತನಾಡಿ, ಪಕ್ಷದ ಅಧಿಕೃತ ಅಭ್ಯರ್ಥಿಗೆ ಮತ ನೀಡದೆ ಆಮಿಷ ಒಡ್ಡಿದ ಬೇರೆ ಪಕ್ಷದ ಅಭ್ಯರ್ಥಿಗೆ ಮತ ಹಾಕಿರುವದು ಮೇಲ್ನೋಟಕ್ಕೆ ಸಾಬೀತಾಗಿರುವದ ರಿಂದ ಪಕ್ಷದ ಘನತೆಗೆ ಧಕ್ಕೆಯಾಗುವಂತೆ ಮಾಧ್ಯ ಮಗಳಿಗೆ ಹೇಳಿಕೆ ಕೊಟ್ಟಿರುವದರಿಂದ ಎಂಟು ಮಂದಿ ಶಾಸಕರನ್ನು ಅಮಾನತು ಮಾಡಿರುವದು ಪಕ್ಷದ ಉತ್ತಮ ಬೆಳವಣಿಗೆಯಾಗಿದೆ. ಪಕ್ಷದ್ರೋಹ ಚಟುವಟಿಕೆಗಾಗಿ 8 ಮಂದಿಯ ಉಚ್ಚಾಟನೆಗೂ ಪಕ್ಷ ಚಿಂತನೆ ನಡೆಸಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಅಲ್ಪಸಂಖ್ಯಾತ ಘಟಕದ ವೀರಾಜಪೇಟೆ ನಗರ ಸಮಿತಿಯ ಆರ್.ಎ. ಸಕ್ಲೈನ್, ಪಕ್ಷದ ಮುಖಂಡರುಗಳಾದ ಎಂ.ಎನ್. ಅಶ್ರಫ್ ಆಲಿ, ಹೆಚ್.ಜಿ. ಗೋಪಾಲ್ ಉಪಸ್ಥಿತರಿದ್ದರು.